ಪೋಸ್ಟ್‌ಗಳು

ಪೂರಕ ವಾತಾವರಣ

ಹಿಂದಿಯ ಸಾರ್ವಕಾಲಿಕ ಜನಪ್ರೀಯ ಸಿನೆಮಾ "ಶೋಲೆ" ತೆರೆಕಂಡು ಇಂದಿಗೆ ೫೦ ವರ್ಷಗಳಾದರೂ, ಅದರಲ್ಲಿಯ ವಿವಿಧ ಸನ್ನಿವೇಶಗಳು , ಡೈಲಾಗುಗಳು, ಹಾಡುಗಳು ಜನರ ಮನದಲ್ಲಿ ಇನ್ನೂ ಅಷ್ಟೇ ತಾಜಾ ಆಗಿವೆ. ಅದರಲ್ಲಿಯ ಒಂದು ಸನ್ನಿವೇಶ... ವೀರುವನ್ನು ಹಿಡಿದು ಕಟ್ಟಿಹಾಕಿದ ಗಬ್ಬರ್ ಸಿಂಗ್ , ವೀರುನ ಪ್ರೇಯಸಿ ಬಸಂತಿಗೆ ಹೇಳುತ್ತಾನೆ ನೀನು ಎಲ್ಲಿಯವರೆಗೆ ಹಾಡು ಹಾಡಿ ನೃತ್ಯ ಮಾಡುವಿಯೋ ಅಲ್ಲಿಯವರೆಗೆ ವೀರುಗೆ ಗುಂಡು ಹಾರಿಸುವುದಿಲ್ಲ ಎಂದು. "ಜಬತಕ್ ಹೈ ಜಾನ್s ಜಾನೇಜಹಾs ಮೈ ನಾಚುಂಗೀs"ಎಂಬ ಹಾಡು ಹಾಡುತ್ತ ಬಸಂತಿ ನೃತ್ಯಮಾಡುವಳು. ಅಸಹಾಯಕಳಾದ ಅವಳು, ಆ ಇಕ್ಕಟ್ಟಿನ ಸನ್ನಿವೇಶಕ್ಕೆ ಅನಿವಾರ್ಯವಾಗಿ ಹಾಗೆ ಮಾಡುವಳು. ಅದೇನೂ ಅವಳು ಖುಶಿಯಿಂದ ಹಾಡಿದ ಹಾಡಲ್ಲ ಮತ್ತು ಮಾಡಿದ ನೃತ್ಯವಲ್ಲ. ಒಂದು ವೇಳೆ ಬಸಂತಿಯಿಂದ ಒಳ್ಳೆಯ ಹಾಡು ಕೇಳುವ ಅಥವಾ ನೃತ್ಯ ನೋಡುವ ಇಚ್ಛೆ ಗಬ್ಬರ್ ಸಿಂಗ್ ಗೆ ಇದ್ದರೆ, ಅವನು ಅದಕ್ಕೆ ಅನುಗುಣವಾಗಿ ಪೂರಕ ವಾತಾವರಣ ಕಲ್ಪಿಸಿರುತ್ತಿದ್ದ. ಆದರೆ, ಅಲ್ಲಿ ಅವನ ಉದ್ದೇಶವೇ ಬೇರೆ ಆಗಿತ್ತು.ಅಲ್ಲವೇ? ತಾನು ಮತ್ತೊಮ್ಮೆ ಅಮೇರಿಕಾದ ಅಧ್ಯಕ್ಷನಾದರೆ, ರಷ್ಯ-ಯುಕ್ರೇನ್ ಯುದ್ಧವನ್ನು ಒಂದೇ ದಿನದಲ್ಲಿ ನಿಲ್ಲಿಸುತ್ತೇನೆ, ಅಮೇರಿಕಾವನ್ನು ಮತ್ತೊಮ್ಮೆ ಮಹಾನ್ ದೇಶವನ್ನಾಗಿ ಮಾಡುತ್ತೇನೆ ಎಂದೆಲ್ಲಾ ಹೇಳಿ ಎರಡನೇ ಬಾರಿ ಅಮೇರಿಕಾದ ಅಧ್ಯಕ್ಷರಾದ ಟ್ರಂಪ ಮಹಾಶಯ, ಯಾವ ಯುಧ್ಧವನ್ನೂ ನಿಲ್ಲಿಸಲಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲ...

೧೦೧ ನೇ ಮಿಷನ್

ಮೊನ್ನೆ ಮೇ ೧೮ ರ ಬೆಳಗ್ಗೆ, ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ PSLV ರಾಕೆಟ್ ಅಸಮರ್ಪಕ ಕಾರ್ಯಕ್ಕೆ ಒಳಗಾದ ಕಾರಣ ಇಸ್ರೋದ ೧೦೧ ನೇ ಮಿಷನ್ ವಿಫಲವಾಗಿದೆ ಎಂಬ ಕಹಿ ಸುದ್ದಿಯನ್ನು ತಾವೂ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಓದಿ/ಕೇಳಿರಬಹುದು. ಈ ಘಟನೆ 'ನಡೆಯುವವರು ಎಡುವದೇ ಕುಳಿತವರು ಎಡುವರೇ' ಎಂಬ ಗಾದೆಯನ್ನು ನೆನಪಿಸುವುದು. ಯಮುನೆಯ ಮಡುವಿನಲ್ಲಿ ವಿಷವನ್ನು ಕಾರಿ ಅಮಾಯಕ ಗೋವುಗಳು ಮತ್ತು ಗೋಪಾಲಕರಿಗೆ ತೊಂದರೆ ಕೊಡುತ್ತಿದ್ದ ಕಾಳಿಂಗ ಸರ್ಪದ ಹೆಡೆಯ ಮೇಲೆ ಬಾಲಕೃಷ್ಣ ಹಾರಿ ನೃತ್ಯಮಾಡಿ ದಮನ ಮಾಡಿದ್ದ ಎಂಬ ವಿಚಾರ ಶ್ರೀಮದ್ಭಾಗವತದ ದಶಮಸ್ಕಂದದಲ್ಲಿ ಬರುತ್ತದೆ. ಅದೇ ರೀತಿ, ಅಮಾಯಕ ಯಾತ್ರಿಕರಿಗೆ ಗುಂಡಿಟ್ಟು ಕೊಂದ ಆ ಶತ್ರುದೇಶದ ಭಯೋತ್ಪಾದಕರ ಠಿಕಾಣಿಗಳ ಮೇಲೆ ನಮ್ಮ ಭಾರತೀಯ ರಕ್ಷಣಾ ಪಡೆ ಬ್ರಹ್ಮೋಸ ಮತ್ತು ಆಕಾಶತೀರ ದಂತಹ ದೇಶೀಯ ಕ್ಷಿಪಣಿಗಳಿಂದ ದಾಳಿಮಾಡಿ ಧ್ವಂಸಮಾಡಿದ ಸುದ್ದಿ ತಮಗೂ ಗೊತ್ತಿರುವ ವಿಷಯ. ಇದೇ ಮೇ ತಿಂಗಳ ಮೊದಲ ವಾರ ಪ್ರಾರಂಭವಾದ ರಕ್ಷಣಾ ಪಡೆಗಳ ಈ ಆಪರೇಷನ್ ಸಿಂದೂರದ ಅಭೂತಪೂರ್ವ ಕಾರ್ಯಕ್ಷಮತೆಯ ಹಿಂದೆ ಮಹತ್ವದ ಹಿಮ್ಮೇಳ ಹಾಕಿದ್ದು ನಮ್ಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಎಂಬುದು ಶ್ಲಾಘನೀಯ. ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಹಾಗು ತಂತ್ರಜ್ಞನರು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ರಾಕೆಟಗಳ ಮತ್ತು ಅವು ಹೊತ್ತು ಒಯ್ದು ಕರಾರುವಕ್ಕಾದ ಕಕ್ಷೆಯಲ್ಲಿ ಸ್ಥಾಪಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರವ ...

ಲುಂಗಿಯ ಸುದ್ದಿ

ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಮಾಜಿ ಅಧ್ಯಕ್ಷರೊಬ್ಬರು ರಾತ್ರೋರಾತ್ರಿ ಉಟ್ಟ ಲುಂಗಿಯಲ್ಲಿ ವಿಮಾನ ಹತ್ತಿ ದೇಶಬಿಟ್ಟು ಪಲಾಯನ ಮಾಡಿದ್ದಾರೆ ಎಂಬ ಸುದ್ದಿ ಫೋಟೋ/ ವಿಡಿಯೋ ಸಹಿತ ವೈರಲ್ ಆಗಿ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳಲ್ಲಿ ಬಂದದ್ದು ತಮಗೂ ತಿಳಿದ ವಿಷಯ. ಒಂದು ವಿಷಯ ಸುದ್ದಿಯಾಗುವಲ್ಲಿ ಮೂರು ಹಂತಗಳಿವೆ. ಒಂದು... ಘಟನೆ ಘಟಿಸಬೇಕು ಅಥವಾ ಘಟಿಸಬೇಕಾದದ್ದು ಘಟಿಸಿರಬಾರದು, ಉದಾಹರಣೆಗೆ ಹೇಳುವುದಾದರೆ ಒಬ್ಬ ಬೆಂಕಿಯಲ್ಲಿ ಕೈ ಹಾಕಿದಾಗ ಅವನ ಕೈ ಸುಡದೇ ಇರುವುದು. ಎರಡು...ಆ ಘಟನೆಯ ದೃಶ್ಯವನ್ನು ಯಾರಾದರು ನೋಡಿರಬೇಕು/ಚಿತ್ರೀಕರಿಸಿಕೊಂಡಿರಬೇಕು ಅಥವಾ ಕಾಣಿಸದಿದ್ದರೆ ಕನಿಷ್ಠಪಕ್ಷ ಕೇಳಿಸಿಕೊಂಡಿರಬೇಕು. ಸ್ಥೂಲವಾಗಿ ಹೇಳುವುದಾದರೆ, ಆ ಘಟನೆಯ ಪ್ರಕಟನೆಯ ದಾಖಲಾತಿ ಆಗಬೇಕು. ಇನ್ನು ಮೂರನೇಯದು... ಘಟನೆ ತೀರಾ ಸಾಮಾನ್ಯ ವಿಷಯವಾಗಿರದೇ, ಅದರಲ್ಲಿ ಏನೋ ವಿಶೇಷತೆ ಇರಬೇಕು. ಭೂಮಿ ಹುಟ್ಟಿದಾಗಿನಿಂದ ಸೂರ್ಯ ಉದಯಿಸುವುದು ಪೂರ್ವದಿಕ್ಕಿಗೇ. ಇಂದು ಕೂಡಾ ಅಕಸ್ಮಾತಾಗಿ ನಾವು ಹಾಸಿಗೆಯಲ್ಲಿ ಬೆಚ್ಚಗೆ ಅಥವಾ ಥಣ್ಣಗೆ ಮಲಗಿದ್ದರೂ ಅಂದರೆ ನಮ್ಮ ಜಂಬದ ಕೋಳಿ ಕೂಗಲಿ ಬಿಡಲಿ, ಸೂರ್ಯನು ಮಾತ್ರ ಪೂರ್ವದಲ್ಲಿಯೇ ಹುಟ್ಟಿರುವುದು. ಅಷ್ಟೇ ಏಕೆ, ನಾಳೆ ನಾವು ಈ ಭೂಮಿಯ ಮೇಲೆ ಇರಲಿ ಬಿಡಲಿ, ಸೂರ್ಯನು ಮಾತ್ರ ಉದಯಿಸುವುದು ಪೂರ್ವದಿಕ್ಕಿಗೆ. ಹಾಗಾಗಿ ಸೂರ್ಯ ಇಂದು ಪೂರ್ವ ದಿಕ್ಕಿಗೆ ಉದಯಿಸಿದ ಎಂಬ ಘಟನೆ ಅಥವಾ ಈ ವಿಷಯ ಸುದ್ದಿಯಾಗಲಾರದು. ಬದಲಾಗಿ ಸೂರ್ಯನು ಅಪ...