ಗಣಿತ ಹುಳಿ ದ್ರಾಕ್ಷಿ ???
ಇತ್ತೀಚೆಗೆ IAS ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ತಿರ್ಣರಾಗುತ್ತಿರುವುದನ್ನೂ ನಾವೆಲ್ಲ ಪತ್ರಿಕೆಗಳಲ್ಲಿ ಓದಿ ಬಲ್ಲೆವು. ಇಂದಿನ ದಿನಗಳಲ್ಲಿ ಸಿವಿಲ್ ಸರ್ವಿಸ್(IAS) ಪರೀಕ್ಷೆ ಪಾಸಾಗುವವರಲ್ಲಿ ಸುಮಾರು ೬೦-೬೫ ಪ್ರತಿಶತ ಜನ ಇಂಜಿನಿಯರಿಂಗ್ ಪದವೀಧರರು.ಇದೊಂದು ಸ್ವಾಗತಾರ್ಹ ಬೆಳವಣಿಗೆ. ನಮ್ಮ ಇಂಜಿನಿಯರಿಂಗ್ ಶಿಕ್ಷಣದ ಮಹತ್ವದ ಭಾಗವಾದ ಗಣಿತ ಶಾಸ್ತ್ರ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಮತ್ತು ಈ ಸಾಮರ್ಥ್ಯಗಳ ಅಗತ್ಯತೆ ನಮ್ಮ ಕಾರ್ಯಾಂಗದ ಬೆನ್ನೆಲುಬಾದ IAS ಅಧಿಕಾರಿಗಳಿಗೆ ಅತೀ ಅವಶ್ಯಕ ಎಂಬುದೂ ಅಷ್ಟೇ ನಿಜ. ಆದರೆ, ಕೆಲದಿನಗಳ ಹಿಂದೆ ಮಾನ್ಯ ರಕ್ಷಣಾ ಮಂತ್ರಿಗಳು ೬೦೦ ಪ್ರಶಿಕ್ಷಣಾರ್ಥಿ IAS ಅಧಿಕಾರಿಗಳೊಂದಿಗೆ ಸಂವಾದ ಮಾಡುವಾಗ ಗಣಿತದ ಒಂದು ಸರಳ ಬಾಯಿಲೆಕ್ಕವನ್ನು ಕೇಳಿದಾಗ ಕೇವಲ ಒಬ್ಬರು ಮಾತ್ರ ಸರಿಯಾದ ಉತ್ತರವನ್ನು ನೀಡಿದರೆಂಬ ಪತ್ರಿಕಾ ವರದಿ ಓದಿ ಖೇದಾಶ್ಚರ್ಯವಾಯಿತು. ನಾವು ಶಾಲಾ ಶಿಕ್ಷಣದಲ್ಲಿ ೧೦ ವರ್ಷ ಎಡಬಿಡದೇ ಗಣಿತವನ್ನು ಕಲಿಯುತ್ತೇವೆ. ಇಂಜಿನಿಯರಿಂಗ್ ಕಲಿಯುವ ಆಸಕ್ತಿ ಇರುವ ನನ್ನಂಥವರು PUC ವಿಜ್ಞಾನ ವಿಭಾಗದಲ್ಲಿ ಮತ್ತೆರಡು ವರ್ಷ ಭೌತಶಾಸ್ತ್ರ, ರಸಾಯನ ಶಾಸ್ತ್ರಗಳ ಜೊತೆಗೆ ಗಣಿತ ಶಾಸ್ತ್ರದ ಕಲಿಕೆ ಮಾಡುತ್ತೇವೆ.ಇನ್ನು ಇಂಜಿನಿಯರಿಂಗ್ ಶಿ...