ಪೋಸ್ಟ್‌ಗಳು

ಪ್ರೊಫೆಷನಲ್ ಸಲಹೆ (ಸಮಾನತೆಯ ಸುಂಟರಗಾಳಿ )

ಎಂದಿನ ಮುಂಜಾನೆಯ ವಾಕಿಂಗ್ ಮುಗಿಸಿ ಬಂದು ಬೆಳಗಿನ ಜಾವ ತಲೆಯಲ್ಲಿ ಹೊಳೆದ ವಿಷಯದ ಮೇಲೆ ಒಂದು ಲೇಖನ ಬರೆಯುತ್ತಾ ಕೂತಿದ್ದೆ. ಎರಡನೇಯ ಕಪ್ಪು ಚಹಾ ಕುಡಿಯಲು ಮನಸ್ಸು ಬಯಸಿತು. ಅಡುಗೆ ಮನೆಗೆ ಹೋಗಿ ಶ್ರೀಮತಿಯ ಮೂಡು ಸರಿಯಾಗಿ ಇರುವುದನ್ನು ಖಾತ್ರಿ ಪಡಿಸಿಕೊಂಡು ಮೆಲ್ಲಗೆ ಒಂದು ಕಪ್ ಚಹಾದ ನಿವೇದನೆಯನ್ನು ಮಾಡಿದೆ. 'ಈಗ ನೀವು ನಿವೃತ್ತಿಯಾಗಿದ್ದೀರಿ, ಇನ್ನು ಮೇಲೆ ನೀವು ತಾಸೆರಡುತಾಸಿಗೊಂದು ಕಪ್ ಚಹಾ ಕುಡಿಯುವುದನ್ನು ಬಂದ ಮಾಡಿರಿ, ಆರೋಗ್ಯಕ್ಕೆ ಒಳ್ಳೆಯದಲ್ಲ, ಇನ್ನು ಮೇಲೆ ಏನಿದ್ದರೂ ಬೆಳಗ್ಗೆ ಒಂದು ಕಪ್ಪು ಮತ್ತು ಸಂಜೆಗೆ ಒಂದು ಕಪ್ಪು ಚಹಾ ಮಾತ್ರ' ಎಂದಳು ನನ್ನ ಶ್ರೀಮತಿ.  ನಾಲಿಗೆ ಚಹಾ ಕುಡಿಯಬೇಕೆಂದು ಬಯಸುತ್ತಿತ್ತಾದರೂ, ಹೆಂಡತಿಯ ಖಂಡತುಂಡ ಮಾತಿನಿಂದ ಸ್ವಲ್ಪ ನಿರಾಸೆ-ಹತಾಶೆಯಿಂದ ಮನಸ್ಸು ಘಾಸಿಗೊಂಡು ಉಪಾಯವಿಲ್ಲದೇ ಲೇಖನ ಬರೆಯಲು ಮುಂದಾದೆ..ಆದರೇ, ಲೇಖನ ಮುಂದೋಡಲಿಲ್ಲ‌. ತಿರುಗಿ ಅಡುಗೆಮನೆಗೆ ಹೋಗಿ 'ಇಲ್ಲಿಯವರೆಗೆ ನಿನ್ನ ಎಲ್ಲ ಸಣ್ಣ ದೊಡ್ಡ ಇಚ್ಚೆ, ಬಯಕೆ, ಆಸೆಗಳನ್ನು ಒಂದನ್ನೂ ಬಿಡದೇ ಪೂರೈಸಿರುವೆ. ಇಂದು ನಾನು ನೌಕರಿಯಿಂದ ನಿವೃತ್ತಿಯಾದರೇನಾಯಿತು, ಈಗಲೂ ನಾನೇ ಈ ಮನೆಯ ಯಜಮಾನ, ಇಂದು ನನ್ನ ಒಂದು ಸಣ್ಣ ನಿವೇದನೆಯನ್ನು ನೀನು ಪೂರೈಸುವುದಿಲ್ಲ ಎಂದು ಇಷ್ಟು ಕಠೋರವಾಗಿ ಹೇಳಲು ನಿನಗೆ ಹೇಗಾದರೂ ಮನಸ್ಸಾಯಿತು' ಎಂದು ನಾಲಿಗೆ ಹರಿಬಿಟ್ಟು ಆಕೆಯನ್ನು ದಬಾಯಿಸಬೇಕು ಎಂಬ ವಿಚಾರ ತಲೆಯಲ್ಲಿ ಬಂತಾದರೂ, ಮತ್ತೆ ...

ಪ್ರಶ್ನೆ ಕೇಳುವುದು

ದೆಹಲಿ ಮೂಲದ ಸರ್ಕಾರೇತರ ಸಂಶೋಧನಾ ಸಂಸ್ಥೆಯಾದ ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಫೆಬ್ರವರಿ 13, 2026 ರವರೆಗೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಮತ್ತು ರಾಜ್ಯಸಭೆಯ ದಾಖಲೆಗಳು ಒದಗಿಸಿದ ದತ್ತಾಂಶದ ಪ್ರಕಾರ, ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ರಾಜ್ಯಸಭಾ ಸದಸ್ಯರೊಬ್ಬರು ತಮ್ಮ ಆರು ವರ್ಷಗಳ ಅವಧಿಯಲ್ಲಿ ಮೇಲ್ಮನೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ ಅಥವಾ ಯಾವುದೇ ಖಾಸಗಿ ಸದಸ್ಯರ ಮಸೂದೆಯನ್ನು ಪರಿಚಯಿಸಿಲ್ಲ, ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಸಂಸದರು ಮಾಡುವ ಯಾವುದೇ 'ವಿಶೇಷ ಉಲ್ಲೇಖ'ಗಳು ಅವರ ಖಾತೆಯಲ್ಲಿ ಇಲ್ಲ ಎಂಬ ಪತ್ರಿಕಾ ವರದಿಯನ್ನು ತಾವೂ ಓದಿರಬಹುದು. ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸದಸ್ಯರು ತಮ್ಮ ವಿದ್ವತ್ತು, ಕಾರ್ಯಕ್ಷೇತ್ರ ಪರಿಣತಿಯ ವಿವಿಧ ದೃಷ್ಟಿಕೋನಗಳು ಮತ್ತು ಅನುಭವಗಳ ಮೂಲಕ ರಾಜ್ಯಸಭೆಯ ಚರ್ಚೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಚರ್ಚೆಗಳ ಗುಣಮಟ್ಟವನ್ನು ಹೆಚ್ಚಿಸಬಹುದು. ಹೀಗಿರುವಾಗ ಆ ರಾಜ್ಯ ಸಭೆಯ ನಾಮ ನಿರ್ದೇಶನ ಸದಸ್ಯರು ಯಾವ ಚರ್ಚೆಯಲ್ಲಿಯೂ ಭಾಗವಹಿಸದೇ, ತಮ್ಮ ಅನಿಸಿಕೆ ಅಭಿಪ್ರಾಯ/ಸಲಹೆಗಳನ್ನು ನೀಡದೇ, ಆರು ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳದೇ ಏನು ಕೊಡುಗೆ ಕೊಟ್ಟರು ಅಥವಾ ಕೊಡುಗೆ ಪಡೆದರು ಎಂಬುದನ್ನು ಆ ಭಗವಂತನೇ ಬಲ್ಲ. ಯಾಕೆಂದರೆ, ನಮ್ಮಲ್ಲಿ ಲೋಕಸಭೆಯಲ್ಲಿ ಪ್ರಶ್ನೆ ಕೇಳಲೂ ಹಣ ಪಡೆದ ಉದಾಹರಣೆಗಳೂ ಇವೆ.ಇರಲಿ, ಆ ಕೊಳಕು ರಾಜ...

ಸ್ಮಶಾನ ವೈರಾಗ್ಯ

ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸ್ಮಶಾನದಲ್ಲಿ ಊಟ, ಭಜನೆ, ವಾಸ್ತವ್ಯ ಮುಂತಾದ ಹೆಜ್ಜೆಗಳನ್ನು ಇಟ್ಟು, ಮೂಢನಂಬಿಕೆಯ ವಿರುದ್ಧ ಜನಜಾಗೃತಿ ಮಾಡಿಸುವ ಕೆಲಸವನ್ನು ಮಾಡಿದ ಮಂತ್ರಿ/ರಾಜಕಿಯ ಮುಖಂಡರ ಸುದ್ದಿಯನ್ನು ಕಳೆದ ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ತಾವೂ ಓದಿರಬಹುದು. ಅದು ಸಮಾಜದಲ್ಲಿನ ಮೂಡನಂಬಿಕೆಯನ್ನು ಎಷ್ಟು ಕಡಿಮೆ ಮಾಡಿತೋ ಗೊತ್ತಿಲ್ಲ, ಆದರೆ ಆ ಚಟುವಟಿಕೆ ಅಬಾಲವೃದ್ಧ, ಸ್ತ್ರೀ ಪುರುಷರೆನ್ನದೇ ಅನೇಕರಲ್ಲಿ ಸ್ಮಶಾನದ ಬಗ್ಗೆ ಇರುವ ಅವ್ಯಕ್ತ ಭಯವನ್ನು ನಿವಾರಿಸಲು ಸಹಕಾರಿ ಆಗಿರಲು ಸಾಕು. ನಮ್ಮ ಮನೆಯಿರವ ದೊಡ್ಡ ಬಡಾವಣೆಯ ದಕ್ಷಿಣ ಭಾಗದಲ್ಲಿ ಒಂದು ಸ್ಮಶಾನವಿದೆ. ಅನೇಕ ದಶಕಗಳ ಹಿಂದೆ ಆ ಸ್ಮಶಾನದ ಜಾಗ ಬಹಳ ವಿಸ್ತಾರವಿತ್ತಂತೆ. ಇಂದು ಅದು ನಮ್ಮ ಬಡಾವಣೆಯ ಒಂದು ಸಣ್ಣ ಭಾಗವಾಗಿದೆ. ಅದರ ಸುತ್ತಲೂ ಕಾಂಪೌಂಡ ಕಟ್ಟಲಾಗಿದ್ದು ಅದರ ಒಳಗೆ ಒಂದು ಬೋರವೆಲ್ ಹಾಕಿದ್ದು ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಬಗೆಯ ಮರಗಳು ಮತ್ತು ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಕಳೆಬರಹವನ್ನು ಸುಡಲು ನಾಲ್ಕಾರು ವಿಶಾಲ ಕಟ್ಟೆಗಳು ಮತ್ತು ಅವುಗಳ ಮೇಲೆ ವ್ಯವಸ್ಥಿತ ಚಿತಾಗಾರ ಸ್ಟಾಂಡಗಳನ್ನು ಮತ್ತು ಮಳೆಗಾಲದ ಅನುಕೂಲಕ್ಕೆಂದು ಎತ್ತರದ ತಗಡಿನ ಮೇಲ್ಚಾವಣಿಯ ವ್ಯವಸ್ಥೆಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಒಂದು ಮಹಾದೇವನ ಗುಡಿಯನ್ನೂ ಕಟ್ಟಲಾಗಿದೆ ಮತ್ತು ಸ್ಮಶಾನದ ಕಾಂಪೌಂಡಿನ ಸುತ್ತಲೂ ಬಡಾವಣೆಯ ರಸ್ತೆಗಳು,ಮನೆಗಳು ಬಂದಿವೆ. ಈ...

ಗಣಿತ ಹುಳಿ ದ್ರಾಕ್ಷಿ ???

ಇಮೇಜ್
ಇತ್ತೀಚೆಗೆ IAS ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ತಿರ್ಣರಾಗುತ್ತಿರುವುದನ್ನೂ ನಾವೆಲ್ಲ ಪತ್ರಿಕೆಗಳಲ್ಲಿ ಓದಿ ಬಲ್ಲೆವು. ಇಂದಿನ ದಿನಗಳಲ್ಲಿ ಸಿವಿಲ್ ಸರ್ವಿಸ್(IAS) ಪರೀಕ್ಷೆ ಪಾಸಾಗುವವರಲ್ಲಿ ಸುಮಾರು ೬೦-೬೫ ಪ್ರತಿಶತ ಜನ ಇಂಜಿನಿಯರಿಂಗ್ ಪದವೀಧರರು.ಇದೊಂದು ಸ್ವಾಗತಾರ್ಹ ಬೆಳವಣಿಗೆ. ನಮ್ಮ ಇಂಜಿನಿಯರಿಂಗ್ ಶಿಕ್ಷಣದ ಮಹತ್ವದ ಭಾಗವಾದ ಗಣಿತ ಶಾಸ್ತ್ರ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಮತ್ತು ಈ ಸಾಮರ್ಥ್ಯಗಳ ಅಗತ್ಯತೆ ನಮ್ಮ ಕಾರ್ಯಾಂಗದ ಬೆನ್ನೆಲುಬಾದ IAS ಅಧಿಕಾರಿಗಳಿಗೆ ಅತೀ ಅವಶ್ಯಕ ಎಂಬುದೂ ಅಷ್ಟೇ ನಿಜ. ಆದರೆ, ಕೆಲದಿನಗಳ ಹಿಂದೆ ಮಾನ್ಯ ರಕ್ಷಣಾ ಮಂತ್ರಿಗಳು ೬೦೦ ಪ್ರಶಿಕ್ಷಣಾರ್ಥಿ IAS ಅಧಿಕಾರಿಗಳೊಂದಿಗೆ ಸಂವಾದ ಮಾಡುವಾಗ ಗಣಿತದ ಒಂದು ಸರಳ ಬಾಯಿಲೆಕ್ಕವನ್ನು ಕೇಳಿದಾಗ ಕೇವಲ ಒಬ್ಬರು ಮಾತ್ರ ಸರಿಯಾದ ಉತ್ತರವನ್ನು ನೀಡಿದರೆಂಬ ಪತ್ರಿಕಾ ವರದಿ ಓದಿ ಖೇದಾಶ್ಚರ್ಯವಾಯಿತು.  ನಾವು ಶಾಲಾ ಶಿಕ್ಷಣದಲ್ಲಿ ೧೦ ವರ್ಷ ಎಡಬಿಡದೇ ಗಣಿತವನ್ನು ಕಲಿಯುತ್ತೇವೆ. ಇಂಜಿನಿಯರಿಂಗ್ ಕಲಿಯುವ ಆಸಕ್ತಿ ಇರುವ ನನ್ನಂಥವರು PUC ವಿಜ್ಞಾನ ವಿಭಾಗದಲ್ಲಿ ಮತ್ತೆರಡು ವರ್ಷ ಭೌತಶಾಸ್ತ್ರ, ರಸಾಯನ ಶಾಸ್ತ್ರಗಳ ಜೊತೆಗೆ ಗಣಿತ ಶಾಸ್ತ್ರದ ಕಲಿಕೆ ಮಾಡುತ್ತೇವೆ.ಇನ್ನು ಇಂಜಿನಿಯರಿಂಗ್ ಶಿ...

ಸಮಸ್ಯೆಯ ಸಮಸ್ಯೆ

ಒಬ್ಬ ತಾಯಿ ತನ್ನ ಸತ್ತ ಮಗುವನ್ನು ಬದುಕಿಸಿಕೊಡಲು ಬೇಡಿಕೊಂಡಾಗ, ಭಗವಾನ್ ಬುದ್ಧ 'ಸಾವಿಲ್ಲದ ಮನೆಯ ಸಾಸಿವೆ ತಾ' ಎಂದು ಹೇಳಿದ ಕಥೆ ನಾವೆಲ್ಲಾ ಕೇಳಿರಲು ಸಾಕು. ಆ ಕಥೆಯ ತಾತ್ಪರ್ಯವಿಷ್ಟೇ, ಹುಟ್ಟಿದವರೆಲ್ಲರೂ ಸಾಯುವುದು ನಿಶ್ಚಿತ. ಅದಕ್ಕಾಗಿ ದುಃಖ ಪಡುವ ಅಗತ್ಯವಿಲ್ಲ ಎಂದು. ಈಗ ಯಾರು ಮೃತಪಟ್ಟರು ಅಥವಾ ಸಾಯಲು ಹೊರಟಿದ್ದಾರೆ ? ಇದೇನು ಈಗ ನಾನು ಸಾವಿನ ವಿಷಯದ ಬಗ್ಗೆ ಮಾತನಾಡುತ್ತಿರುವೆ ಅಂತ ಅಂದುಕೊಂಡಿರಾ... ಇದೇ ನೋಡಿ ಸಮಸ್ಯೆ. ನಾವು ಸಾಮಾನ್ಯವಾಗಿ ವಾಸ್ತವವನ್ನು ಅಥವಾ ಸತ್ಯವನ್ನು ಎದುರಿಸುವುದರಿಂದ ವಿಮುಖರಾಗುವುದು ಅಥವಾ ಪಲಾಯನ ಮಾಡುವುದು ಅಲ್ಲವೇ? ಇರಲಿ, ಆ ಮೇಲಿನ ಗೌತಮ ಬುದ್ಧನ ಕಥೆಯನ್ನು ಇಂದಿನ ದಿನಮಾನಗಳಿಗನುಸಾರವಾಗಿ ಹೇಳುವುದಾದರೆ... ತನ್ನ ಮಕ್ಕಳು ಯಾವಾಗಲೂ ಮೊಬೈಲನಲ್ಲೇ ಕಾಲ ಕಳೆಯುತ್ತಾರೆ. ಇದೊಂದು ಸಮಸ್ಯೆಯಾಗಿದೆ. ಹೇಗಾದರೂ ಮಾಡಿ ಈ ಸಮಸ್ಯೆಯಿಂದ ಮಕ್ಕಳನ್ನು ಹೊರತರುವ ಉಪಾಯವನ್ನು ಹೇಳು ಎಂದು ಒಬ್ಬ ತಾಯಿ ಇಂದಿನ ಬುದ್ಧು ಗೂಗಲ್ ಗುರುವಿಗೋ ಅಥವಾ ಏಐಗೋ ಕೇಳಿದರೆ, ಅದರಿಂದ ಥಟ್ಟನೇ ಬರುವ ಉತ್ತರ 'ಸಮಸ್ಯೆ ಇಲ್ಲದ ಮನೆಯ ಸಾಮಾನು ತಾ' ಎಂದು.!!! ಎಲ್ಲರ ಮನೆಯ ದೋಸೆಗೂ ತೂತು ಎಂಬಂತೆ ಎಲ್ಲರ ಮನೆಯಲ್ಲಿ ಸಮಸ್ಯೆಗಳೇ ಸಮಸ್ಯೆಗಳು. ಹಾಗೆ ನೋಡಿದರೆ, ನಾವು ಸಮಸ್ಯೆಗಳಲ್ಲಿಯೇ ಹುಟ್ಟಿ, ಸಮಸ್ಯೆಗಳಲ್ಲಿಯೇ ಜೀವಿಸಿ, ಕೊನೆಗೆ ಸಮಸ್ಯೆಗಳೊಟ್ಟಿಗೇ ಸಾಯುವುದು. ಅಲ್ಲಲ್ಲಾ... ಬಹುಶಃ ನಾವು ಹುಟ್ಟುತ್ತೇವೆ ಎಂ...

ಗಳಗನಾಥರು...ಕನ್ನಡ ಕಾದಂಬರಿಯ ಯುಗಪುರುಷ

ಇಮೇಜ್
ಇಪ್ಪತ್ತೊಂದನೆಯ ಶತಮಾನದ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಮತ್ತು ಇತರ ತಂತ್ರಜ್ಞಾನಗಳ ಅವಿಷ್ಕಾರ ಹಾಗು ನಾವೀನ್ಯತೆಯ ತೀವ್ರಗತಿಯ ಸದ್ಬಳಕೆಯ ಇಂದಿನ ದಿನಗಳಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ಕನ್ನಡದಲ್ಲಿ ಕಥೆ-ಕಾದಂಬರಿಗಳು, ಪ್ರಬಂಧಗಳು, ಪೌರಾಣಿಕ ಗ್ರಂಥಗಳು, ಸತ್ಪುರುಷರ ಜೀವನ ಚರಿತ್ರೆಗಳು ಇತ್ಯಾದಿಗಳ ಲೇಖನ ಮತ್ತು ಮಾಸಪತ್ರಿಕೆಯ ಸಂಪಾದಕತ್ವ, ಮುದ್ರಣ ಮತ್ತು ಪ್ರಕಾಶನವಲ್ಲದೇ ಆ ಪುಸ್ತಕಗಳ ಮಾರಾಟದಂತಹ ಕನ್ನಡದ ತ್ರಿವಿಧ ಸೇವೆಯನ್ನು ಸ್ವಾರ್ಥರಹಿತವಾಗಿ ಮಾಡುತ್ತಿದ್ದರೆ ದಿನ ಬೆಳಗಾಗುವುದರಲ್ಲಿ ಸರ್ಕಾರ, ಮಠ ಮಾನ್ಯಗಳು, ವಿವಿಧ ಸಾಂಸ್ಕೃತಿಕ ಸಂಘ ಸಂಸ್ಥೆಗಳು, ಸುದ್ದಿ ಮಾಧ್ಯಮಗಳು ಮತ್ತು ಡಿಜಿಟಲ್ ಸಾಮಾಜಿಕ ಮಾಧ್ಯಮಗಳಲ್ಲಿ ಸಂದುವ ಪ್ರಚಾರ, ಪ್ರಶಸ್ತಿಗಳು, ಮಾನ್ಯತೆ ಮತ್ತು ಹಣ ಸಂಪಾದನೆ ಅಷ್ಟಿಷ್ಟಲ್ಲ. ಆದರೆ, ಈ ತರಹದ ಯಾವುದೇ ಸಾಧನಗಳು, ಸವಲತ್ತು ಮತ್ತು ಸಹಕಾರ ಪ್ರೋತ್ಸಾಹಗಳಿಲ್ಲದೇ, ಕನ್ನಡ ನಾಡು ನುಡಿಗಳಿಗೆ ಹೇಳಿಕೊಳ್ಳುವ ಯಾವ ಮಾನ್ಯತೆ, ರಾಜಾಶ್ರಯಗಳಿಲ್ಲದ, ಪೇಶ್ವೆಗಳ ಕಾಲದ ಮರಾಠಿ ಭಾಷೆಯ ಪ್ರಭಾವ ಬ್ರಿಟಿಷರ ಕಾಲದಲ್ಲೂ ಮುಂದುವರೆದ ಹತ್ತೊಂಬತ್ತನೇಯ ಶತಮಾನದ ಕೊನೆಯ ದಶಕ ಮತ್ತು ಇಪ್ಪತ್ತನೆಯ ಶತಮಾನದ ಪ್ರಾರಂಭದ ಎರಡು ದಶಕಗಳ ಕಾಲಘಟ್ಟದಲ್ಲಿ ಉತ್ತರ ಕರ್ನಾಟಕದ ಹಳ್ಳಿಗಾಡಿನಲ್ಲಿ ಕೇವಲ ಮುಲ್ಕಿ ಶಿಕ್ಷಣ ಹೊಂದಿದ ಶಾಲಾ ಶಿಕ್ಷಕನೊಬ್ಬ ಕನ್ನಡ ಸಾರಸ್ವತ ಲೋಕಕ್ಕೆ ಮಾಡಿದ ತಳಮಟ್ಟದ ಸೇ...

ತುಪ್ಪ ಉಪ್ಪಿನ ಲೆಕ್ಕ

ಇಮೇಜ್
ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೈಕ್ರೋಸಾಫ್ಟ್ ಆಫೀಸ್ ನ ಪಾವರ್ ಪಾಯಿಂಟ್ ಪ್ರೆಸೆಂಟೇಷನ್ ನಲ್ಲಿ ನಾವು ಕಲಿಸುವ ವಿಷಯದ ಸ್ಲೈಡ ತಯಾರಿಸಿ ಎಲ್ಸಿಡಿ ಪ್ರೊಜೆಕ್ಟರ್ ಉಪಯೋಗಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದೆಂದರೆ ನಮಗೆಲ್ಲ ಬಹಳ ಕೌತುಕದ ವಿಷಯವಾಗಿತ್ತು. ಒಂದು ದಿನ ಸಂಜೆ ಮರುದಿನದ ಕ್ಲಾಸಿನ ಸ್ಲೈಡ ತಯಾರಿಯಲ್ಲಿ ನಾನು ತಲ್ಲೀನನಾಗಿದ್ದೆ. ಆಗ ಪ್ರೈಮರಿ ಶಾಲೆಗೆ ಹೋಗುತ್ತಿದ್ದ ಮುದ್ದಿನ ಮಗಳು ಕುತೂಹಲದಿಂದ ಅಪ್ಪ ಏನು ಮಾಡುತ್ತಿರುವಿ ಎಂದು ವಿಚಾರಿಸಿದಳು. ನಿನ್ನಹಾಗೆ ನಾನೂ ಹೋಮವರ್ಕ್ ಮಾಡುತ್ತಿರುವೆ ಎಂದಾಗ ಅವಳು ನೀನು ಹೋಮವರ್ಕ್ ಮಾಡದೇ ಇದ್ದರೆ ನಿಮ್ಮ ಪ್ರಿನ್ಸಿಪಾಲ್ ನಿನಗೆ ಪನಿಶ್ಮೆಂಟ್ ಕೊಡುವರೇ ಎಂದು ಕುತೂಹಲದಿಂದ ಕೇಳಿದಳು. ಹೌದು, ನಮ್ಮ ಪ್ರಿನ್ಸಿಪಾಲ್ ನಿಮ್ಮ ಮಿಸ್ಸಗಿಂತಲೂ ಬಹಳ ಸ್ಟ್ರಿಕ್ಟ್ ಎಂದು ಹೇಳಿದೆ. ಹೌದಾ, ಹಾಗಾದರೆ ಚೆನ್ನಾಗಿ ಹೋಮವರ್ಕ್ ಮಾಡು ಎಂದು ನಾನು ತಯಾರುಮಾಡುತ್ತಿದ್ದ ಸ್ಲೈಡನ ತಲೆಬರಹ ಓದಿದಳು. ಅದು 'ABC Analysis' (ವಿಶ್ಲೇಷಣೆ) ಎಂದಾಗಿತ್ತು. ತಕ್ಷಣವೇ ನನ್ನ ಮಗಳು ಅಡುಗೆ ಮನೆಗೆ ಓಡಿ ಹೋಗಿ 'ಅಪ್ಪ ಇಷ್ಟು ವರ್ಷವಾದರೂ ಇನೂ ನನ್ನಂತೆ ABC ಕಲೀತಿದ್ದಾರೆ' ಎಂದು ತಮ್ಮ ಅಮ್ಮನಿಗೆ ತಿಳಿಸಿದಳು. ನನ್ನಾಕೆ  ಹೌದೇನರೀs, ನಿಮ್ಮ ಮಗಳು ಹೇಳುವುದು ನಿಜವಾ ಎಂದು ಕೇಳಿದಳು. ಹೌದು ಈಗ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ABC ವಿಶ್ಲೇಷಣೆ ವಿಷಯ ಕುರಿತ...

ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...

ಕಲಬುರ್ಗಿಯಲ್ಲಿ ಹೊಳಿ ಹಬ್ಬದ ನಂತರ ಬರುವ ಶರಣಬಸವೇಶ್ವರ ಜಾತ್ರೆಯನ್ನು ಬಾಲ್ಯದ ದಿನಗಳಲ್ಲಿ ನಾವು ಬಹಳ ಉತ್ಸುಕತೆಯಿಂದ ಇದಿರು ನೋಡುತ್ತಿದ್ದೆವು. ಕಾರಣವಿಷ್ಟೆ, ಪ್ರತೀ ವರ್ಷ ರಂಗಪಂಚಮಿಯ ದಿನದಂದು ಅಪ್ಪನ ತೇರು ಎಳೆಯುವುದಕ್ಕೂ ಹದಿನೈದು ದಿನಗಳ ಮೊದಲೇ ಕಬ್ಬಿನ ಹಾಲಿನ ಅಂಗಡಿಗಳು ಬೀಳುತ್ತಿದ್ದವು. ಅಪ್ಪನ ತೇರು ಎಳೆದ ದಿನದಿಂದ ಮುಂದಿನ ಹದಿನೈದು ದಿನಗಳವರೆಗೆ ನಮಗೆ ಜಾತ್ರೆಯಲ್ಲಿ ವಿವಿಧ ಅಂಗಡಿಗಳಲ್ಲಿ ವಿಜಾಪುರದ ಚಿವಡಾ, ಗೋಕಾಕಿನ ಕರದಂಟು, ಗಾಣದ ಉಂಡಿ, ಬೆಂಡು ಬತ್ತಾಸುಗಳು ಸವಿಯಲು ಸಿಗುತ್ತಿದ್ದವು. ಮನೆಯಲ್ಲಿ ಅಪ್ಪನ ಜಾತ್ರೆಗೆಂದು ಸಿಗುತ್ತಿದ್ದ ಹತ್ತಿಪ್ಪತ್ತು ಪೈಸೆಯಲ್ಲಿ ಯಾವುದನ್ನು ತಿನ್ನುವುದು ಯಾವುದನ್ನು ಬಿಡುವುದು ಎಂದು ನಿರ್ಧರಿಸಲು ನಮಗೆ ಬಹಳ ಕಷ್ಟವಾಗುತ್ತಿರಲಿಲ್ಲ. ಆ ಮಾತಿಗೆ ದಶಕಗಳು ಕಳೆದಂತೆ, ಈಗಿನ ಹುಡುಗರು ಆ ಮಿಠಾಯಿಗಳನ್ನು ಸವಿಯಲು ಊರ ಜಾತ್ರೆಯ ಇದಿರು ನೋಡಬೇಕಾಗಿಲ್ಲ. ಕೇವಲ ಅವಷ್ಟೇ ಅಲ್ಲ ಇನ್ನೂ ನೂರಾರು ಬಗೆಯ ಸಿಹಿ ಖಾರ ತಿಂಡಿ ಖಾದ್ಯಗಳ ಮತ್ತು ವಿವಿಧ ಬಗೆಯ ಪೇಯಗಳ ಅಂಗಡಿ ಮಳಿಗೆಗಳು ಊರಿನ ಎಲ್ಲಾ ಗಲ್ಲಿ, ರಸ್ತೆಗಳಲ್ಲಿ ತಲೆಯತ್ತಿವೆ ಮತ್ತು ಈಗಿನ ಹುಡುಗರ ಕೈ, ಜೇಬು, ಫೋನ ತುಂಬಾ ಹಣ ಇರುತ್ತದೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಇಂದಿನ ಹುಡುಗರಿಗೆ ಯಾವುದನ್ನು ತಿನ್ನಲಿ, ಯಾವುದನ್ನು ಬಿಡಲಿ, ಯಾವುದು ಒಳ್ಳೆಯ ಅಂಗಡಿ, ಎಲ್ಲಿ ರುಚಿಕರ ಮತ್ತು ಶುದ್ಧ ಖಾದ್ಯಗಳು ಲಭ್ಯ ಎಂದು ಆಯ್ಕೆ ಮಾಡುವುದೇ ಒಂದು...

ಸ್ವಚ್ಛತೆಯವರು...

ನಾವು ಮಾಡುವ ಊಟ ಒಂದು ಯಜ್ಞವಿದ್ದಂತೆ, ಊಟ ಮಾಡುವಾಗ ಮಾತನಾಡಬಾರದು, ಮಾತು ಬೆಳೆದು ಕಲಹಕ್ಕೆ ಕಾರಣವಾದೀತು ಎಂದು ನಮ್ಮಮ್ಮ ಯಾವಾಗಲೂ ಹೇಳುತ್ತಿದ್ದರು. ಆ ಮಾತು ಇಷ್ಟು ವರ್ಷಗಳ ನಂತರ ಈಗ ಅಂದರೆ, ನನ್ನ ನಿವೃತ್ತಿಯ ನಂತರ ಬಹಳ ನೆನಪಾಗುತ್ತಿದೆ. ಅದಕ್ಕೆ ಇತ್ತೀಚೆಗೆ ನಿವಾಂತವಾಗಿ ಮನೆಯಲ್ಲಿ ಮಾತಾಡದೇ ಆದರೆ ರೇಡಿಯೋ ಹಚ್ಚಿ ಸಂಗಿತ ಕೇಳುತ್ತಾ ಊಟ ಮಾಡುವುದನ್ನು ಪ್ರಾರಂಭಿಸಿರುವುದು. ಈಗ ನನಗೆನೋ ಊಟ ರುಚಿಸುತ್ತಿದೆ ಆದರೆ, ಏಕೋ ನನ್ನ ಶ್ರೀಮತಿಗೆ ಅಷ್ಟು ರುಚಿಸುತ್ತಿಲ್ಲವಂತೆ. ನೀವು ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸುವುದಕ್ಕೂ ಮುನ್ನ ನಾನೇ ಹೇಳಿಬಿಡುತ್ತೇನೆ. ನಿಜ, ನೂರು ಪ್ರತಿಶತ ನಿಜ, ನಿವೃತ್ತಿಯ ನಂತರ ನಿಮ್ಮಂತೆ ನಾನೂ ನಳಪಾಕನಾಗಿರುವುದೇ ನನ್ನಾಕೆಗೆ ಊಟ ರುಚಿಸದೇ ಇರಲು ಕಾರಣವೇ ಹೊರತು ನೀವು ಊಹಿಸಿದಂತಲ್ಲ!!. ಈ ಮಾತನ್ನು ಅವಳ ಅನುಮತಿ ಪಡೆದೇ ನಿಮ್ಮೊಂದಿಗೆ ಹೇಳುತ್ತಿರುವುದು, ಇರಲಿ. ಇತ್ತೀಚೆಗೆ ನಮ್ಮ ಆಕಾಶವಾಣಿಯಲ್ಲಿ ಒಂದು ಮಹತ್ವದ ಜಾಹೀರಾತು ಮತ್ತೆ ಮತ್ತೆ ಬಿತ್ತರವಾಗುತ್ತಿದೆ. ಅಷ್ಟು ಮಹತ್ವದ ಜಾಹೀರಾತು ಯಾವುದೆಂದಿರಾ, ನಿಮಗೂ ಗೊತ್ತಿರುವ ವಿಷಯವೇ, ಅದೇ ಮನೆಯ ಸೆಪ್ಟಿಕ್ ಟ್ಯಾಂಕನಲ್ಲಿ ಶೇಖರವಾದ ಸ್ಲಜ್ಜನ್ನು ತಪ್ಪದೇ ಪ್ರತಿ ಮೂರು ವರ್ಷಕ್ಕೊಮ್ಮೆ ಖಾಲಿಮಾಡಿಸುವ ಅಗತ್ಯತೆಗಳನ್ನು ಹೇಳುವ ವಿಷಯ. ಇಲ್ಲದಿದ್ದರೆ ನಿಮ್ಮ ಮನೆಯ ಪೈಖಾನೆಯ(ಸಂಡಾಸದ) ಸೆಪ್ಟಿಕ್ ಟ್ಯಾಂಕ ತುಂಬಿ ಅಲ್ಲಿನ ಮಲಿನ ನೀರು ಹೊರಬಂದು ಮನೆಯ ಸುತ್ತ ಗಬ್ಬ...

ಸತ್ತ ಗುರು !!!

ಇಮೇಜ್
ನಮ್ಮ ಜಾತ್ಯಾತೀತ ದೂರದರ್ಶನದ ಚಂದನ ವಾಹಿನಿಯನ್ನು ನೋಡುತ್ತಿದ್ದವರಿಗೆ 1994 ರಲ್ಲಿ ಉದಯಾ ಟಿವಿ ಖಾಸಗಿ ಕೇಬಲ್ ವಾಹಿನಿ ಪ್ರಾರಂಭವಾದದ್ದು BSNL ನ ಲ್ಯಾಂಡಲೈನ ಫೋನಿನಿಂದ ಏಕ್ದಂ Jio ದ ಸಿಮ್ ಗೆ ಜಿಗಿದ ಅನುಭವವಾಗಿತ್ತು. ಉದಯಾ ಟಿವಿಯಲ್ಲಿ ಬಿತ್ತರವಾಗುತ್ತಿದ್ದ ಬಹುತೇಕ ಕಾರ್ಯಕ್ರಮಗಳು ವೀಕ್ಷಕರ ಮನಗೆದ್ದಿದ್ದವು. ರವಿವಾರ ಬೆಳಗ್ಗೆ ಪ್ರಸಾರವಾಗುತ್ತಿದ್ದ S K ಜೈನ ಅವರ ವಾರದ ಭವಿಷ್ಯ ಕಾರ್ಯಕ್ರಮ ಬಹಳೇ ಪ್ರಸಿದ್ಧಿ ಪಡೆದಿತ್ತು. ಮುಂದಿನ ವಾರದ ಗೋಚಾರದಲ್ಲಿ ಯಾವ ಗ್ರಹಗಳು ಯಾವ ರಾಶಿಯಲ್ಲಿ ಇರುತ್ತವೆ ಮತ್ತು ಅವುಗಳ ಪ್ರಭಾವ ಯಾವ ರಾಶಿಯವರಿಗೆ ಹೇಗಿರುತ್ತದೆ, ಯಾವ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆದಿದೆ, ಮುಗಿದಿದೆ ಅಥವಾ ಸಾಡೆಸಾತಿ ಹಿಡಿಯುವುದಿದೆ, ಅದರಂತೆಯೇ ಗುರುವಿನ ಚಲನೆ ಹೇಗಿದೆ, ಯಾವ ರಾಶಿಯವರಿಗೆ ಗುರು ಉಚ್ಚವಾಗಿದೆ, ನೀಚವಾಗಿದೆ ಮತ್ತು ಯಾವ ರಾಶಿಯವರಿಗೆ ಗುರು ಅಸ್ತವಾಗಿದೆ ಇತ್ಯಾದಿಗಳನ್ನು ವಿವರಿಸುತ್ತಿದ್ದರು. ಆದರೆ, ನಾವು ಯಾರೂ ಆ ಉದಯಾ ಟಿವಿಯಲ್ಲಿಯ S K ಜೈನರ ವಾರದ ಭವಿಷ್ಯ ಕಾರ್ಯಕ್ರಮದಲ್ಲಿ ಗುರು ಸತ್ತ ವಿಚಾರ ಎಂದೂ ಕೇಳಿರಲಿಕ್ಕಿಲ್ಲ ಅಲ್ಲವೇ. ಆದರೆ ಹೋದ ವರ್ಷ(೦೧.೦೪.೨೦೨೪) ಏಕಾಏಕಿ ವಾಟ್ಸ್ಯಾಪ ಗುಂಪುಗಳನ್ನೂ ಮೊದಲು ಮಾಡಿಕೊಂಡು ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಗಡಿನಾಡು, ಕುಂದಾನಗರಿ ಬೆಳಗಾವಿಯ ಒಂದು ಅಂಗಡಿಯ 'ಸತ್ತಗುರು' ಎಂಬ ಬೋರ್ಡಿನ ಚಿತ್ರ ವೈರಲ್ ಆಗಿ ಹರಿದಾಡಿ ಸದ್ದು ...