ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

೧೦೧ ನೇ ಮಿಷನ್

ಮೊನ್ನೆ ಮೇ ೧೮ ರ ಬೆಳಗ್ಗೆ, ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ PSLV ರಾಕೆಟ್ ಅಸಮರ್ಪಕ ಕಾರ್ಯಕ್ಕೆ ಒಳಗಾದ ಕಾರಣ ಇಸ್ರೋದ ೧೦೧ ನೇ ಮಿಷನ್ ವಿಫಲವಾಗಿದೆ ಎಂಬ ಕಹಿ ಸುದ್ದಿಯನ್ನು ತಾವೂ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಓದಿ/ಕೇಳಿರಬಹುದು. ಈ ಘಟನೆ 'ನಡೆಯುವವರು ಎಡುವದೇ ಕುಳಿತವರು ಎಡುವರೇ' ಎಂಬ ಗಾದೆಯನ್ನು ನೆನಪಿಸುವುದು. ಯಮುನೆಯ ಮಡುವಿನಲ್ಲಿ ವಿಷವನ್ನು ಕಾರಿ ಅಮಾಯಕ ಗೋವುಗಳು ಮತ್ತು ಗೋಪಾಲಕರಿಗೆ ತೊಂದರೆ ಕೊಡುತ್ತಿದ್ದ ಕಾಳಿಂಗ ಸರ್ಪದ ಹೆಡೆಯ ಮೇಲೆ ಬಾಲಕೃಷ್ಣ ಹಾರಿ ನೃತ್ಯಮಾಡಿ ದಮನ ಮಾಡಿದ್ದ ಎಂಬ ವಿಚಾರ ಶ್ರೀಮದ್ಭಾಗವತದ ದಶಮಸ್ಕಂದದಲ್ಲಿ ಬರುತ್ತದೆ. ಅದೇ ರೀತಿ, ಅಮಾಯಕ ಯಾತ್ರಿಕರಿಗೆ ಗುಂಡಿಟ್ಟು ಕೊಂದ ಆ ಶತ್ರುದೇಶದ ಭಯೋತ್ಪಾದಕರ ಠಿಕಾಣಿಗಳ ಮೇಲೆ ನಮ್ಮ ಭಾರತೀಯ ರಕ್ಷಣಾ ಪಡೆ ಬ್ರಹ್ಮೋಸ ಮತ್ತು ಆಕಾಶತೀರ ದಂತಹ ದೇಶೀಯ ಕ್ಷಿಪಣಿಗಳಿಂದ ದಾಳಿಮಾಡಿ ಧ್ವಂಸಮಾಡಿದ ಸುದ್ದಿ ತಮಗೂ ಗೊತ್ತಿರುವ ವಿಷಯ. ಇದೇ ಮೇ ತಿಂಗಳ ಮೊದಲ ವಾರ ಪ್ರಾರಂಭವಾದ ರಕ್ಷಣಾ ಪಡೆಗಳ ಈ ಆಪರೇಷನ್ ಸಿಂದೂರದ ಅಭೂತಪೂರ್ವ ಕಾರ್ಯಕ್ಷಮತೆಯ ಹಿಂದೆ ಮಹತ್ವದ ಹಿಮ್ಮೇಳ ಹಾಕಿದ್ದು ನಮ್ಮ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಎಂಬುದು ಶ್ಲಾಘನೀಯ. ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಹಾಗು ತಂತ್ರಜ್ಞನರು ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ರಾಕೆಟಗಳ ಮತ್ತು ಅವು ಹೊತ್ತು ಒಯ್ದು ಕರಾರುವಕ್ಕಾದ ಕಕ್ಷೆಯಲ್ಲಿ ಸ್ಥಾಪಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರವ ...

ಲುಂಗಿಯ ಸುದ್ದಿ

ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಮಾಜಿ ಅಧ್ಯಕ್ಷರೊಬ್ಬರು ರಾತ್ರೋರಾತ್ರಿ ಉಟ್ಟ ಲುಂಗಿಯಲ್ಲಿ ವಿಮಾನ ಹತ್ತಿ ದೇಶಬಿಟ್ಟು ಪಲಾಯನ ಮಾಡಿದ್ದಾರೆ ಎಂಬ ಸುದ್ದಿ ಫೋಟೋ/ ವಿಡಿಯೋ ಸಹಿತ ವೈರಲ್ ಆಗಿ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳಲ್ಲಿ ಬಂದದ್ದು ತಮಗೂ ತಿಳಿದ ವಿಷಯ. ಒಂದು ವಿಷಯ ಸುದ್ದಿಯಾಗುವಲ್ಲಿ ಮೂರು ಹಂತಗಳಿವೆ. ಒಂದು... ಘಟನೆ ಘಟಿಸಬೇಕು ಅಥವಾ ಘಟಿಸಬೇಕಾದದ್ದು ಘಟಿಸಿರಬಾರದು, ಉದಾಹರಣೆಗೆ ಹೇಳುವುದಾದರೆ ಒಬ್ಬ ಬೆಂಕಿಯಲ್ಲಿ ಕೈ ಹಾಕಿದಾಗ ಅವನ ಕೈ ಸುಡದೇ ಇರುವುದು. ಎರಡು...ಆ ಘಟನೆಯ ದೃಶ್ಯವನ್ನು ಯಾರಾದರು ನೋಡಿರಬೇಕು/ಚಿತ್ರೀಕರಿಸಿಕೊಂಡಿರಬೇಕು ಅಥವಾ ಕಾಣಿಸದಿದ್ದರೆ ಕನಿಷ್ಠಪಕ್ಷ ಕೇಳಿಸಿಕೊಂಡಿರಬೇಕು. ಸ್ಥೂಲವಾಗಿ ಹೇಳುವುದಾದರೆ, ಆ ಘಟನೆಯ ಪ್ರಕಟನೆಯ ದಾಖಲಾತಿ ಆಗಬೇಕು. ಇನ್ನು ಮೂರನೇಯದು... ಘಟನೆ ತೀರಾ ಸಾಮಾನ್ಯ ವಿಷಯವಾಗಿರದೇ, ಅದರಲ್ಲಿ ಏನೋ ವಿಶೇಷತೆ ಇರಬೇಕು. ಭೂಮಿ ಹುಟ್ಟಿದಾಗಿನಿಂದ ಸೂರ್ಯ ಉದಯಿಸುವುದು ಪೂರ್ವದಿಕ್ಕಿಗೇ. ಇಂದು ಕೂಡಾ ಅಕಸ್ಮಾತಾಗಿ ನಾವು ಹಾಸಿಗೆಯಲ್ಲಿ ಬೆಚ್ಚಗೆ ಅಥವಾ ಥಣ್ಣಗೆ ಮಲಗಿದ್ದರೂ ಅಂದರೆ ನಮ್ಮ ಜಂಬದ ಕೋಳಿ ಕೂಗಲಿ ಬಿಡಲಿ, ಸೂರ್ಯನು ಮಾತ್ರ ಪೂರ್ವದಲ್ಲಿಯೇ ಹುಟ್ಟಿರುವುದು. ಅಷ್ಟೇ ಏಕೆ, ನಾಳೆ ನಾವು ಈ ಭೂಮಿಯ ಮೇಲೆ ಇರಲಿ ಬಿಡಲಿ, ಸೂರ್ಯನು ಮಾತ್ರ ಉದಯಿಸುವುದು ಪೂರ್ವದಿಕ್ಕಿಗೆ. ಹಾಗಾಗಿ ಸೂರ್ಯ ಇಂದು ಪೂರ್ವ ದಿಕ್ಕಿಗೆ ಉದಯಿಸಿದ ಎಂಬ ಘಟನೆ ಅಥವಾ ಈ ವಿಷಯ ಸುದ್ದಿಯಾಗಲಾರದು. ಬದಲಾಗಿ ಸೂರ್ಯನು ಅಪ...