ಪೋಸ್ಟ್‌ಗಳು

ಅಕ್ಟೋಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸತ್ತ ಗುರು !!!

ಇಮೇಜ್
ನಮ್ಮ ಜಾತ್ಯಾತೀತ ದೂರದರ್ಶನದ ಚಂದನ ವಾಹಿನಿಯನ್ನು ನೋಡುತ್ತಿದ್ದವರಿಗೆ 1994 ರಲ್ಲಿ ಉದಯಾ ಟಿವಿ ಖಾಸಗಿ ಕೇಬಲ್ ವಾಹಿನಿ ಪ್ರಾರಂಭವಾದದ್ದು BSNL ನ ಲ್ಯಾಂಡಲೈನ ಫೋನಿನಿಂದ ಏಕ್ದಂ Jio ದ ಸಿಮ್ ಗೆ ಜಿಗಿದ ಅನುಭವವಾಗಿತ್ತು. ಉದಯಾ ಟಿವಿಯಲ್ಲಿ ಬಿತ್ತರವಾಗುತ್ತಿದ್ದ ಬಹುತೇಕ ಕಾರ್ಯಕ್ರಮಗಳು ವೀಕ್ಷಕರ ಮನಗೆದ್ದಿದ್ದವು. ರವಿವಾರ ಬೆಳಗ್ಗೆ ಪ್ರಸಾರವಾಗುತ್ತಿದ್ದ S K ಜೈನ ಅವರ ವಾರದ ಭವಿಷ್ಯ ಕಾರ್ಯಕ್ರಮ ಬಹಳೇ ಪ್ರಸಿದ್ಧಿ ಪಡೆದಿತ್ತು. ಮುಂದಿನ ವಾರದ ಗೋಚಾರದಲ್ಲಿ ಯಾವ ಗ್ರಹಗಳು ಯಾವ ರಾಶಿಯಲ್ಲಿ ಇರುತ್ತವೆ ಮತ್ತು ಅವುಗಳ ಪ್ರಭಾವ ಯಾವ ರಾಶಿಯವರಿಗೆ ಹೇಗಿರುತ್ತದೆ, ಯಾವ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆದಿದೆ, ಮುಗಿದಿದೆ ಅಥವಾ ಸಾಡೆಸಾತಿ ಹಿಡಿಯುವುದಿದೆ, ಅದರಂತೆಯೇ ಗುರುವಿನ ಚಲನೆ ಹೇಗಿದೆ, ಯಾವ ರಾಶಿಯವರಿಗೆ ಗುರು ಉಚ್ಚವಾಗಿದೆ, ನೀಚವಾಗಿದೆ ಮತ್ತು ಯಾವ ರಾಶಿಯವರಿಗೆ ಗುರು ಅಸ್ತವಾಗಿದೆ ಇತ್ಯಾದಿಗಳನ್ನು ವಿವರಿಸುತ್ತಿದ್ದರು. ಆದರೆ, ನಾವು ಯಾರೂ ಆ ಉದಯಾ ಟಿವಿಯಲ್ಲಿಯ S K ಜೈನರ ವಾರದ ಭವಿಷ್ಯ ಕಾರ್ಯಕ್ರಮದಲ್ಲಿ ಗುರು ಸತ್ತ ವಿಚಾರ ಎಂದೂ ಕೇಳಿರಲಿಕ್ಕಿಲ್ಲ ಅಲ್ಲವೇ. ಆದರೆ ಹೋದ ವರ್ಷ(೦೧.೦೪.೨೦೨೪) ಏಕಾಏಕಿ ವಾಟ್ಸ್ಯಾಪ ಗುಂಪುಗಳನ್ನೂ ಮೊದಲು ಮಾಡಿಕೊಂಡು ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಗಡಿನಾಡು, ಕುಂದಾನಗರಿ ಬೆಳಗಾವಿಯ ಒಂದು ಅಂಗಡಿಯ 'ಸತ್ತಗುರು' ಎಂಬ ಬೋರ್ಡಿನ ಚಿತ್ರ ವೈರಲ್ ಆಗಿ ಹರಿದಾಡಿ ಸದ್ದು ...

ಅಲ್ಲಿದೆ ನಮ್ಮನೆ...

ಈ ಭೂಮಿಯ ಮೇಲೆ ಇಂದು ಇರುವವರಾರೂ ಸ್ವರ್ಗವನ್ನು, ಅಲ್ಲಿಯ ಸುಖ, ಸಮೃದ್ಧಿ, ಸಂತೋಷ, ಸಂಭ್ರಮ, ಸೌಲಭ್ಯ ಇತ್ಯಾದಿಗಳನ್ನು ಅಥವಾ ೫೬ ಸಖಿಯರ ಸ್ವಛಂದ ಸೇವಾಸುಖವನ್ನು ಆನಂದಿಸಿ ವಾಪಸ್ ಬಂದು ವಿವರಿಸಿದವರಿಲ್ಲ. ಆದರೂ, ಸ್ವರ್ಗದ ಬದುಕಿನ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ವಿವಿಧ ಧಾರ್ಮಿಕ ಗ್ರಂಥಗಳನ್ನು ಓದಿ ಅಥವಾ ಕೇಳಿ ಅರಿಯದವರು ತೀರಾ ವಿರಳ.  ಅಂತಹದರಲ್ಲಿ ಪುಟಾಣಿ ಏಜೆಂಟ್ 123 ಸಿನಿಮಾದಲ್ಲಿ  'ಇಲ್ಲೇ ಸ್ವರ್ಗ ಇಲ್ಲೇ ನರಕಾ ಮೇಲೇನಿಲ್ಲ ಸುಳ್ಳು...'ಎಂದು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರು ಹಾಡಿನ ಮುಖಾಂತರ ಹೇಳಿರುವರು. ಅವರ ಮಾತುಗಳನ್ನು ಒಪ್ಪುವುದಾದರೆ, ಭೂಮಿಯ ಮೇಲಿನ ಸ್ವರ್ಗ ಎಂದು ನಮ್ಮಲ್ಲಿ ಬಹುತೇಕರು ಒಪ್ಪುವ ಸ್ಥಳ ಅಮೇರಿಕಾ ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ ಅಲ್ಲವೇ?. ಮತ್ತೆ, ನಮ್ಮ ಶ್ರೀರಾಮಚಂದ್ರ 'ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ' ಎಂದು ಹೇಳಿದ್ದಾನಲ್ಲ ಎಂದರೆ, ಅಯ್ಯೋ ಬಿಡಿ ಅದು ತ್ರೇತಾಯುಗದಲ್ಲಿಯ ಮಾತು ಎಂದು ನೀವು ಮೂಗು ಮುರಿಯಬಹುದು, ಇಲ್ಲವೇ ಪ್ರಗತಿಪರ ಬುದ್ದಿ ಜೀವಿಗಳಾಗಿದ್ದರೆ ಶ್ರೀರಾಮ ಒಂದು ಕಾಲ್ಪನಿಕ ಪಾತ್ರವಷ್ಟೇ, ಅಲ್ಲದೇ ಅವನ ಮಾತಿಗೆ ಬೆಲೆ ಕೊಡುವುದು ನಮ್ಮ ಜಾತ್ಯಾತೀತ ಸಿದ್ಧಾಂತಕ್ಕೆ ವಿರುದ್ಧ ಎಂದೂ ಪ್ರತಿಪಾದಿಸಬಹುದು. ಅದು ಬಿಡಿ, ಅಂತರೀಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದು ನಾಲ್ಕು ದಶಕಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಶ್ನೆಗೆ ಉತ್ತರಿಸ...