ನನ್ನ ಇಂಜಿನಿಯರಿಂಗ್ ಬ್ರ್ಯಾಂಚ...
ಕಲಬುರ್ಗಿಯಲ್ಲಿ ಹೊಳಿ ಹಬ್ಬದ ನಂತರ ಬರುವ ಶರಣಬಸವೇಶ್ವರ ಜಾತ್ರೆಯನ್ನು ಬಾಲ್ಯದ ದಿನಗಳಲ್ಲಿ ನಾವು ಬಹಳ ಉತ್ಸುಕತೆಯಿಂದ ಇದಿರು ನೋಡುತ್ತಿದ್ದೆವು. ಕಾರಣವಿಷ್ಟೆ, ಪ್ರತೀ ವರ್ಷ ರಂಗಪಂಚಮಿಯ ದಿನದಂದು ಅಪ್ಪನ ತೇರು ಎಳೆಯುವುದಕ್ಕೂ ಹದಿನೈದು ದಿನಗಳ ಮೊದಲೇ ಕಬ್ಬಿನ ಹಾಲಿನ ಅಂಗಡಿಗಳು ಬೀಳುತ್ತಿದ್ದವು. ಅಪ್ಪನ ತೇರು ಎಳೆದ ದಿನದಿಂದ ಮುಂದಿನ ಹದಿನೈದು ದಿನಗಳವರೆಗೆ ನಮಗೆ ಜಾತ್ರೆಯಲ್ಲಿ ವಿವಿಧ ಅಂಗಡಿಗಳಲ್ಲಿ ವಿಜಾಪುರದ ಚಿವಡಾ, ಗೋಕಾಕಿನ ಕರದಂಟು, ಗಾಣದ ಉಂಡಿ, ಬೆಂಡು ಬತ್ತಾಸುಗಳು ಸವಿಯಲು ಸಿಗುತ್ತಿದ್ದವು. ಮನೆಯಲ್ಲಿ ಅಪ್ಪನ ಜಾತ್ರೆಗೆಂದು ಸಿಗುತ್ತಿದ್ದ ಹತ್ತಿಪ್ಪತ್ತು ಪೈಸೆಯಲ್ಲಿ ಯಾವುದನ್ನು ತಿನ್ನುವುದು ಯಾವುದನ್ನು ಬಿಡುವುದು ಎಂದು ನಿರ್ಧರಿಸಲು ನಮಗೆ ಬಹಳ ಕಷ್ಟವಾಗುತ್ತಿರಲಿಲ್ಲ. ಆ ಮಾತಿಗೆ ದಶಕಗಳು ಕಳೆದಂತೆ, ಈಗಿನ ಹುಡುಗರು ಆ ಮಿಠಾಯಿಗಳನ್ನು ಸವಿಯಲು ಊರ ಜಾತ್ರೆಯ ಇದಿರು ನೋಡಬೇಕಾಗಿಲ್ಲ. ಕೇವಲ ಅವಷ್ಟೇ ಅಲ್ಲ ಇನ್ನೂ ನೂರಾರು ಬಗೆಯ ಸಿಹಿ ಖಾರ ತಿಂಡಿ ಖಾದ್ಯಗಳ ಮತ್ತು ವಿವಿಧ ಬಗೆಯ ಪೇಯಗಳ ಅಂಗಡಿ ಮಳಿಗೆಗಳು ಊರಿನ ಎಲ್ಲಾ ಗಲ್ಲಿ, ರಸ್ತೆಗಳಲ್ಲಿ ತಲೆಯತ್ತಿವೆ ಮತ್ತು ಈಗಿನ ಹುಡುಗರ ಕೈ, ಜೇಬು, ಫೋನ ತುಂಬಾ ಹಣ ಇರುತ್ತದೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಇಂದಿನ ಹುಡುಗರಿಗೆ ಯಾವುದನ್ನು ತಿನ್ನಲಿ, ಯಾವುದನ್ನು ಬಿಡಲಿ, ಯಾವುದು ಒಳ್ಳೆಯ ಅಂಗಡಿ, ಎಲ್ಲಿ ರುಚಿಕರ ಮತ್ತು ಶುದ್ಧ ಖಾದ್ಯಗಳು ಲಭ್ಯ ಎಂದು ಆಯ್ಕೆ ಮಾಡುವುದೇ ಒಂದು...