ಪೋಸ್ಟ್‌ಗಳು

ಡಿಸೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಐಸ್ಕ್ರೀಮ್ ನ ಮಹಿಮೆ

ವಿದ್ಯಾಕಾಶಿ ಎಂದೇ ಹೆಸರುವಾಸಿಯಾದ ಧಾರವಾಡದಲ್ಲಿ ಮೂರು ವರ್ಷ ಬಿಎಸ್ಸೀ ನಂತರ ಒಂದು ವರ್ಷ ಬಿಎಡ್ ಪದವಿ ಪಡೆದು ನನಗೂ ನಮ್ಮ ತಾಯಿಯಂತೆ ಆದರ್ಶ ಶಿಕ್ಷಕಿಯಾಗುವ ಆಸೆ, ಆದರೆ ಅದೇ ತಾನೆ ಟಿಸಿಎಚ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ತಂದೆಯವರಿಗೆ ಒಂದು ಒಳ್ಳೆಯ ಮನೆತನ ನೋಡಿ ನನ್ನ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವ ತವಕ. ಅಂತೂ ಮನೆಯ ಹತ್ತಿರದ ಒಂದು ಶಾಲೆಯಲ್ಲಿ ಪಾಠ ಮಾಡಲು ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ ದೂರದ ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರ ಮನೆತನದ ಸಂಬಂಧವನ್ನು ತಂದೆಯವರು ಪ್ರಸ್ತಾಪಿಸಿದರು.ಅವರದು ದೊಡ್ಡ ಕೂಡು ಕುಟುಂಬ. ಮನೆಯ ಮಕ್ಕಳು ಸೊಸೆಯಂದಿರು ಕನಿಷ್ಠವೆಂದರೂ ಸ್ನಾತಕೊತ್ತರ ಪದವಿಧರರು.ವಿಶೇಷ ವೆಂದರೆ ಮೂರೂ ಗಂಡು ಮಕ್ಕಳು ಕ್ರಮವಾಗಿ ಡಿಗ್ರೀ ಕಾಲೇಜು /ಮೆಡಿಕಲ್ ಕಾಲೇಜು/ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು ಎಂದೆಲ್ಲಾ ವಿವರಿಸಿ ಶಿಫಾರಸ್ಸು ಮಾಡಿದರು.  ಅಂತೂ ನನ್ನ ಶಿಕ್ಷಕಿಯ ವೃತ್ತಿ ಕೆಲವೇ ತಿಂಗಳುಗಳಲ್ಲಿ ಸಮಾಪ್ತಿ ಹೊಂದಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕನೊಂದಿಗೆ ಮದುವೆಯಾಗಿ ಅತೀ ಬಿಸಿಲೂರು ಎಂಬ ಖ್ಯಾತಿಯ ಗುಲ್ಬರ್ಗಾ ಸೇರಿದೆ. ಮನೆಯ ಹಿರಿಯ ಸೊಸೆ, ನಗರದ ಪ್ರತಿಷ್ಠಿತ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ನಾನೂ ಅವರ ಶಾಲೆಯಲ್ಲಿ ಇಲ್ಲವೆ ಮನೆ ಸನಿಹದ ರೋಟರಿ ಸಂಸ್ಥೆಯ ಶಾಲೆಯಲ್ಲಿ ಟೀಚರ ಕೆಲಸ ಸೇರಿಕೊಂಡು ನನ್...

ವಾಟ್ಸ್ಯಾಪ್ ನ Good morning ಸಂದೇಶ

ಸ್ಮಾರ್ಟ್ ಫೋನ್ ಮತ್ತು ಅದರಲ್ಲಿ ವಾಟ್ಸ್ಯಾಪ್ ಬಂದಾಗಿನಿಂದ ದಿನಾಲೂ  ಬೆಳ್ಳಂಬೆಳಿಗ್ಗೆ ಶುಭ ಮುಂಜಾನೆ/Good morning ಸಂದೇಶಗಳು ಫೋನುಗಳಲ್ಲಿ ಹರಿದಾಡದಿದ್ದರೇ ಕೆಲವರಿಗೆ ತಮ್ಮ ಪ್ರಾತರ್ವಿಧಿಗಳು ಪೂರ್ಣ ಆಗುವ ಸಾಧ್ಯತೆ ಕಡಿಮೆ,ಇರಲಿ.  ಕೆಲವರು ಪ್ರತಿದಿನವೂ ತಪ್ಪದೇ ಹೊಸ ಹೊಸ ಸಂದೇಶಗಳನ್ನು ಸೃಷ್ಟಿಸಿ ಅಥವಾ ಇಂಟರ್ನೆಟ್ ನಲ್ಲಿ ಹೆಕ್ಕಿತೆಗೆದು ರವಾನಿಸಿದರೆ, ಇನ್ನೂ ಅನೇಕರು ತಮಗೆ ಫಾರ್ವರ್ಡ್ಆಗಿ ಬಂದ ಸಂದೇಶಗಳನ್ನು ಮರುಪ್ರಸಾರ ಮಾಡುವ ಅಭ್ಯಾಸವನ್ನು ರೂಡಿ ಮಾಡಿಕೊಂಡಿರುತ್ತಾರೆ.ಈ ಪ್ರವೃತ್ತಿಯು ಮೊದಮೊದಲು ವರ್ಗ,ವರ್ಣ,ಲಿಂಗ ಭೇದವಿಲ್ಲದೇ ಎಲ್ಲ ವಯೋಮಾನದವರಲ್ಲಿ ಕಂಡುಬಂದರೆ, ಝೆನ್ ಝೀ ವಿದ್ಯಾರ್ಥಿ/ಯುವ ಪೀಳಿಗೆಯಲ್ಲಿ ನಿಧಾನವಾಗಿ ಕ್ಷೀಣಿಸಿದಂತೆ ಕಾಣುತ್ತದೆ. ಆದರೇ, ಐವತ್ತಕ್ಕೂ ಮೇಲ್ಪಟ್ಟ ಪ್ರಭುಧ್ಧ ನಾಗರೀಕರಲ್ಲಿ ಅದರಲ್ಲಿಯೂ ನಿವೃತ್ತಿಯ ಆಸುಪಾಸಿನವರಲ್ಲಿ ಇದು ಇನ್ನೂ ಚಾಲ್ತಿಯಲ್ಲಿದ್ದಂತೆ ಕಾಣುತ್ತದೆ.ಈ ಟ್ರೆಂಡ್ ಅಥವಾ ಪ್ರವೃತ್ತಿಗೆ ಕಾರಣಗಳನ್ನು ವಿಶ್ಲೇಷಿಸಿದಾಗ ಕಂಡುಬಂದದ್ದೆಂದರೆ, ಯುವ ಪೀಳಿಗೆಯವರಲ್ಲಿನ ಸಮಯದ ಕೊರತೆ ಹಾಗೂ ಜೀವನಾನುಭವದ ಮಾತಿನ ಅನಗತ್ಯತೆಯ ಭಾವನೆಯಾದರೆ, ವಯಸ್ಕರಲ್ಲಿಯ ಇದರ ವ್ಯತಿರಿಕ್ತತೆ. ಅಲ್ಲದೇ ಇತ್ತೀಚಿಗೆ ನಾ ಕಂಡ ಕೆಲವು ವಾಟ್ಸ್ಯಾಪ್ ಯುನಿವರ್ಸಿಟಿಯಲ್ಲಿ ವಯಸ್ಕರಿಗಾಗಿ ಬಿತ್ತರವಾಗುವ ಸಲಹೆಗಳಲ್ಲೊಂದಾದ ... ದಿನಾಲೂ ಈ ತರಹದ ಗುಡ್ ಮಾರ್ನಿಂಗ್ ಸಂದೇಶ ತಪ್ಪದೇ ರವಾನಿಸುವುದು ತಮ್ಮ ...

ಶೇಂಗಾ ಚಿಕ್ಕಿ ...

ನಾನು ನೂತನ ವಿದ್ಯಾಲಯ ಹೈಸ್ಕೂಲಿನ ೮ನೇ ತರಗತಿಯಲ್ಲಿದ್ದಾಗ, ಬಿಂದುಮಾಧವ ಸರ್ ನಮಗೆ ವಿಜ್ಞಾನ ವಿಷಯವನ್ನು ಕಲಿಸುತ್ತಿದ್ದರು. ಅಂದು ಮಾಸ್ತರ್ ಜೀವಶಾಸ್ತ್ರದ ಪಾಠ ಮಾಡುತ್ತಾ ಸಸ್ಯ ಮತ್ತು ಪ್ರಾಣಿಗಳಲ್ಲಿಯ ದ್ವಿನಾಮ /ದ್ವಿಪದ ನಾಮಕರಣದ ವ್ಯವಸ್ಥೆಯನ್ನು ವಿಜ್ಞಾನಿ ಕ್ಯಾರೊಲಸ್ ಲಿನ್ನಿಯಸ್ ಪರಿಚಯಿಸಿದರು. ಈ ವ್ಯವಸ್ಥೆಯ ಪ್ರಕಾರ, ಪ್ರತಿಯೊಂದು ಜೀವಿಯು ನನ್ನ ಎರಡು ಹೆಸರುಗಳು - ಕುಲದ ಹೆಸರು ಮತ್ತು ಜಾತಿಯ ಹೆಸರು ಹೊಂದಿರುತ್ತದೆ.ಜೀವಿಗಳ ಕುಲದ ಹೆಸರು ಮತ್ತು ಜಾತಿಯ ಹೆಸರನ್ನು ಒಟ್ಟಿಗೆ ಬರೆಯಲಾಗಿ ಅದರ ವೈಜ್ಞಾನಿಕ ಹೆಸರು ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಮಾನವನಿಗೆ ಹೋಮೋ ಸೇಪಿಯನ್ಸ್ ಎಂದೂ ಜೇನುನೊಣಕ್ಕೆ ಅಪಿಸ್ ಮೆಲ್ಲಿಫೆರಾ ಎಂದು ದ್ವಿನಾಮ ನಾಮಕರಣ ಮಾಡಲಾಗಿದೆ  ಎಂದು ವಿವರಿಸಿದ್ದರು. ಮರುದಿನ, ನಮ್ಮ ಬಿಂದುಮಾಧವ ಮಾಸ್ತರು, ಭೌತಶಾಸ್ತ್ರದ ಯಾವುದೋ ಒಂದು ಪಾಠವನ್ನು ಹೇಳುತ್ತಿದ್ದರು. ಹಿಂದಿನ ಸಾಲಿನ ಕೊನೆಯ ಬೆಂಚಿನ ಕಾಯಂ ಗಿರಾಕೀಗಳಾದ ಕಿಟ್ಯಾ ಮತ್ತು ಮಲ್ಲ್ಯಾ(ಕೃಣಾರಾವ ಕುಲಕರ್ಣಿ ಮತ್ತು ಮಲ್ಲಿಕಾರ್ಜುನ ದೇವನೂರ) ಗುಸು ಗುಸು ಅಂತ ಮಾತನಾಡುತ್ತಿದ್ದರು. ಬಹಳ ಕಡಕ್ ಮಾಸ್ತರರು ಎಂದು ಖ್ಯಾತರಾದ ಬಿಂದುಮಾಧವ ಸರ್ ಅಂದೇಕೋ ಬಹಳ ಶಾಂತವಾಗಿ ಇಬ್ಬರಿಗೂ ತಮ್ಮ ಹತ್ತಿರ ಬರಲು ಆದೇಶಿಸಿದರು.ಇಬ್ಬರೂ ಸ್ವಲ್ಪ ಆಶ್ಚರ್ಯ ಹಾಗೂ ಗಾಬರಿ ಮಿಶ್ರಿತ ಮುಖಚರ್ಯೆಯಿಂದ ಮಾಸ್ತರ್ ಸನಿಹ ತಪ್ಪಿತಸ್ಥರ ಹಾಗೆ ಬಂದು ನಿಂತರು. ಮಾಸ್ತರರು, ಅ...