ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ಬಿಳಿ ತಲೆಯ ಬಣ್ಣಗಳು (ಭಾಗ-೨).

ಭಾಗ...೨ (ಕೊನೆಯದಕ್ಕೂ ಮೊದಲಿನ ಭಾಗ) ನಮ್ಮ ಮಗಳನ್ನು ಮನೆ ಸನಿಹದ ಪ್ರಾಥಮಿಕ ಶಾಲೆಗೆ (ನಡೆದುಕೊಂಡು ಹೋಗಿ) ಬಿಟ್ಟುಬರುವ ಮತ್ತೂ ಮನೆಗೆ ಕರೆದುಕೊಂಡು ಬರುವ ಕೆಲಸ‌ ನನ್ನ ಶ್ರೀಮತಿಯದಾಗಿತ್ತು. ಅದೇನೋ ಒಂದು ದಿನ, ಮಗಳನ್ನು ಶಾಲೆಯಿಂದ ಕರೆತರಲು ನಾನು ನನ್ನ ಬೈಕ್ ಮೇಲೆ ತೆರಳಿದೆ. ಮನೆ ಸೇರಿದ ಮೇಲೆ ನನ್ನ ಮಗಳು, ಇನ್ನು ಮೇಲೆ ಅಪ್ಪ ನನ್ನನ್ನು ಶಾಲೆಗೆ ಬಿಡಲು ಅಥವಾ ಕರೆಯಲು ಬರುವಂತಿಲ್ಲ ಎಂದು ಫರ್ಮಾನು ಹೊರಡಿಸಿದಳು. ನಾನು ಮಗಳನ್ನು ಸರಿಯಾಗಿ ಕೂಡಿಸಿಕೊಂಡು ನಿಧಾನವಾಗಿ ಬೈಕ್ ಓಡಿಸಿಕೊಂಡು ಬಂದರೂ,ನನ್ನ ಮಗಳು ಹೀಗೇಕೆ ಕಾಯ್ದೆಮಾಡಲು ಹಟ ಹಿಡಿದಿದ್ದಾಳೆಂದು ಕಾರಣ ತಿಳಿದುಬರಲಿಲ್ಲ. ನಂತರ ಶ್ರೀಮತಿಯಿಂದ ತಿಳಿದಿದ್ದೇನೆಂದರೆ, ನಾನು ಮಗಳ ಕ್ಲಾಸಿನ ಟೀಚರ್ ಹತ್ತಿರ ನಮ್ಮ ಮಗಳನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ತಿಳಿಸಿದಾಗ, ನನ್ನ ಮಗಳ ಗೆಳೆತಿಯರು ನನ್ನ ಕರಿಮಿಶ್ರಿತ ಬಿಳಿ ತಲೆಯನ್ನು ಗಮನಿಸಿ ನಿಮ್ಮ 'ಅಜೋಬಾ' ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವರು ಎಂದಿದ್ದರಂತೆ.!!! ಅಂತೂ, ಅಂದಿನಿಂದ ಮುಂದೆಂದೂ ನಾನು ಅವಳ ಪ್ರಾಥಮಿಕ ಶಾಲೆಗೆ ಹೋಗಲಿಲ್ಲ.  ಇನ್ನು ಅವಳು ಹೈಸ್ಕೂಲಿಗೆ ಬರುವಷ್ಟರಲ್ಲಿ ನಾನೂ ನಮ್ಮ ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಆಗಿ ಬಡ್ತಿ ಹೊಂದಿದ್ದೆ.ಅದನ್ನರಿತ ಅವರ ಶಾಲೆಯ ಆಡಳಿತ ಮಂಡಳಿ, ಕರಿಯರ್ ಪ್ಲಾನಿಂಗ್ ವಿಷಯದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಲು ನನ್ನನ್ನು ತಮ್ಮ ಶಾಲೆಗೆ ಆವ್ಹಾನಿಸಿದರಷ್ಟೇ ಅ...

ನನ್ನ ಬಿಳಿ ತಲೆಯ ಬಣ್ಣಗಳು ...(ಭಾಗ-೧)

೩೫ ವರ್ಷಗಳ ಸುದೀರ್ಘ ಶಿಕ್ಷಣ ಕ್ಷೇತ್ರದಲ್ಲಿಯ ನನ್ನ ಸೇವೆಯನ್ನು ಮುಗಿಸಿ ನೌಕರಿಯಿಂದ ನಿವೃತ್ತಿಯ ನಂತರ, ಅಂದರೆ ಈ ವೃತ್ತಿಯಲ್ಲಿಯ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದ್ದ ಅರ್ಧ ವಾರ್ಷಿಕ/ವಾರ್ಷಿಕ ಸೂಟೀಗಳನ್ನು ಸಂಪೂರ್ಣ ಮರೆತು, ಬಿಡುವಿಲ್ಲದೇ ದುಡಿದು,EL ಜೊತೆ CL ಹೊಂದಿಸಿಕೊಂಡು ರಜೆ ಹಾಕುವಂತಿಲ್ಲ, ಸರ್ಕಾರಿ ರಜೆ ಮತ್ತೂ ರವಿವಾರಗಳ ನಡುವೆ CL ಗಳನ್ನು ಹೊಂದಿಸಿಕೊಂಡು ಒಟ್ಟು ೫ ದಿನಕ್ಕಿಂತ ಜಾಸ್ತಿ ರಜೆ ಹಾಕುವಂತಿಲ್ಲ ಎಂಬಿತ್ಯಾದಿ ಅನೇಕ ಬದಲಾದ ರಜಾ ಸಂಬಂಧಿ ನೌಕರಿಯ ನಿಯಮಗಳಿಂದ ಮುಕ್ತವಾದ ಮೇಲೆ, ನಾನು ಪತ್ನಿಸಮೇತನಾಗಿ ನಮ್ಮ ಉತ್ತರ ಕರ್ನಾಟದ ವಿವಿಧ ಕ್ಷೇತ್ರಗಳ ಪರ್ಯಟನದಲ್ಲಿದ್ದೆ. ಅಂದು ಬೆಳಗ್ಗೆ ನಾವು ಬೆಳಗಾವಿಯಿಂದ ಉತ್ತರಕನ್ನಡ ಜಿಲ್ಲೆಯ ಸ್ವಾದಿ (ಸೋಂದಾ) ಗೆ ಕಾರಿನಲ್ಲಿ ಹೊರಟಿದ್ದೆವು. ಹಳಿಯಾಳದ ಮಿತ್ರರು ತಮ್ಮಲ್ಲಿ ಚಹಾಕ್ಕೆ ಇಳಿಯಲು ಆಗ್ರಹ ಪೂರ್ವಕ ಒತ್ತಾಯಿಸಿದರು. ಅವರ ಸಲಹೆಯ ಪ್ರಕಾರ, ನಮ್ಮ ಪ್ರವಾಸವನ್ನು ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮದ ಸುಮಾರು 700 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡ ಘಂಟೆ ವಿನಾಯಕನ ದರ್ಶನ ಮಾಡಿಕೊಂಡು ಮುಂದುವರಿಸಲು ನಿರ್ಧರಿಸಿದೆವು. ಮುಖ್ಯ ರಸ್ತೆಯಿಂದ ಒಳತಿರುಗಿ ನಾಲ್ಕಾರು ಕಿಲೋಮೀಟರ್ ಮಲೆನಾಡಿನ ಕಾಡಿನ ರಮಣೀಯ ಪ್ರಶಾಂತ ಪರಿಸರದಲ್ಲಿ ನಾವು ಗುಡಿ ತಲುಪಿದಾಗ ಮಧ್ಯಾಹ್ನದ ಎರಡು ಘಂಟೆ ಆಗಿತ್ತು. ನಮ್ಮಂಥಾ ದೂರದ ಊರುಗಳಿಂದ ಬಂದ ನಾಲ್ಕಾರು ಕಾರಿನ ಜನ ಮಾತ್ರ ದೇವಸ್ಥಾನದ ಪರಿಸರದಲ್ಲ...