ಪೋಸ್ಟ್‌ಗಳು

ಜೂನ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ್ಮಶಾನ ವೈರಾಗ್ಯ

ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸ್ಮಶಾನದಲ್ಲಿ ಊಟ, ಭಜನೆ, ವಾಸ್ತವ್ಯ ಮುಂತಾದ ಹೆಜ್ಜೆಗಳನ್ನು ಇಟ್ಟು, ಮೂಢನಂಬಿಕೆಯ ವಿರುದ್ಧ ಜನಜಾಗೃತಿ ಮಾಡಿಸುವ ಕೆಲಸವನ್ನು ಮಾಡಿದ ಮಂತ್ರಿ/ರಾಜಕಿಯ ಮುಖಂಡರ ಸುದ್ದಿಯನ್ನು ಕಳೆದ ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ತಾವೂ ಓದಿರಬಹುದು. ಅದು ಸಮಾಜದಲ್ಲಿನ ಮೂಡನಂಬಿಕೆಯನ್ನು ಎಷ್ಟು ಕಡಿಮೆ ಮಾಡಿತೋ ಗೊತ್ತಿಲ್ಲ, ಆದರೆ ಆ ಚಟುವಟಿಕೆ ಅಬಾಲವೃದ್ಧ, ಸ್ತ್ರೀ ಪುರುಷರೆನ್ನದೇ ಅನೇಕರಲ್ಲಿ ಸ್ಮಶಾನದ ಬಗ್ಗೆ ಇರುವ ಅವ್ಯಕ್ತ ಭಯವನ್ನು ನಿವಾರಿಸಲು ಸಹಕಾರಿ ಆಗಿರಲು ಸಾಕು. ನಮ್ಮ ಮನೆಯಿರವ ದೊಡ್ಡ ಬಡಾವಣೆಯ ದಕ್ಷಿಣ ಭಾಗದಲ್ಲಿ ಒಂದು ಸ್ಮಶಾನವಿದೆ. ಅನೇಕ ದಶಕಗಳ ಹಿಂದೆ ಆ ಸ್ಮಶಾನದ ಜಾಗ ಬಹಳ ವಿಸ್ತಾರವಿತ್ತಂತೆ. ಇಂದು ಅದು ನಮ್ಮ ಬಡಾವಣೆಯ ಒಂದು ಸಣ್ಣ ಭಾಗವಾಗಿದೆ. ಅದರ ಸುತ್ತಲೂ ಕಾಂಪೌಂಡ ಕಟ್ಟಲಾಗಿದ್ದು ಅದರ ಒಳಗೆ ಒಂದು ಬೋರವೆಲ್ ಹಾಕಿದ್ದು ನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಬಗೆಯ ಮರಗಳು ಮತ್ತು ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಕಳೆಬರಹವನ್ನು ಸುಡಲು ನಾಲ್ಕಾರು ವಿಶಾಲ ಕಟ್ಟೆಗಳು ಮತ್ತು ಅವುಗಳ ಮೇಲೆ ವ್ಯವಸ್ಥಿತ ಚಿತಾಗಾರ ಸ್ಟಾಂಡಗಳನ್ನು ಮತ್ತು ಮಳೆಗಾಲದ ಅನುಕೂಲಕ್ಕೆಂದು ಎತ್ತರದ ತಗಡಿನ ಮೇಲ್ಚಾವಣಿಯ ವ್ಯವಸ್ಥೆಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಒಂದು ಮಹಾದೇವನ ಗುಡಿಯನ್ನೂ ಕಟ್ಟಲಾಗಿದೆ ಮತ್ತು ಸ್ಮಶಾನದ ಕಾಂಪೌಂಡಿನ ಸುತ್ತಲೂ ಬಡಾವಣೆಯ ರಸ್ತೆಗಳು,ಮನೆಗಳು ಬಂದಿವೆ. ಈ...